ಪರಿಸರವಾದಿಯಾದ ಈಶ್ವರಪ್ಪ ಹೆದ್ದಾರಿ ಕಾಮಗಾರಿಯನ್ನೇಕೆ ವಿರೋಧಿಸಲಿಲ್ಲ?
ಶಾಸಕ ಬೇಳೂರು ಪ್ರಶ್ನೆ
ಶಿವಮೊಗ್ಗ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಶಾಸಕ ಗೋಪಾಲ ಕೃಷ್ಣ ಬೇಳೂರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಈಶ್ವರಪ್ಪ ಅವರು ಪದೇ ಪದೇ ಕಾಂಗ್ರೆಸ್ ಹಾಗೂ ಮುಸ್ಲಿಮರ ವಿರುದ್ಧ ಮಾತನಾಡುವುದನ್ನು ಟೀಕಿಸಿದರಲ್ಲದೆ , “ಬಿಜೆಪಿಯಲ್ಲೇ ಅವರ ರಾಜಕೀಯಕ್ಕೆ ಭವಿಷ್ಯ ಇಲ್ಲ. ಪಕ್ಷಕ್ಕೆ ಹೋದರೂ ಟಿಕೆಟ್ ಸಿಗುವುದಿಲ್ಲ” ಎಂದು ಭವಿಷ್ಯ ನುಡಿದದರು.
ಹಿಂದುತ್ವ ಎಂದವರನ್ನು ಬಿಜೆಪಿ ಮೂಲೆ ಗುಂಪು ಮಾಡಿದೆ. ಅದರಂತೆ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅನಂತಕುಮಾರ್ ಹೆಗಡೆ ಅವರಂತಹ ನಾಯಕರನ್ನು ಬಿಜೆಪಿ ಕಡೆಗಣಿಸಿದೆ. ಅದರಂತೆ ಈಶ್ವರಪ್ಪನವರನ್ನೂ ಮೂಲೆ ಗುಂಪು ಮಾಡಲಿದ್ದಾರೆ ಎಂದು ಹೇಳಿದರು.
“ಶಿವಮೊಗ್ಗದಲ್ಲಿ ಗೊಂದಲ ಸೃಷ್ಟಿಸುವ ರಾಜಕೀಯ ನಡೆಯುವುದಿಲ್ಲ. ಮುಂದಿನ ವಿಧಾನ ಸಭ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಗೆಲ್ಲುತ್ತಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಂಪ್ ಸ್ಟೋರೇಜ್ ಯೋಜನೆಗೆ
ಪಂಪ್ ಸ್ಟೋರೇಜ್ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಈಶ್ವರಪ್ಪ ಅವರಿಗೆ ತಿರುಗೇಟು ನೀಡಿದ ಬೇಳೂರು, “ಪರಿಸರದ ಬಗ್ಗೆ ಕಾಳಜಿ ಇದ್ದರೆ ಲಕ್ಷಾಂತರ ಮರಗಳು ನಾಶವಾಗುತ್ತಿರುವ ಹೆದ್ದಾರಿ ಕಾಮಗಾರಿಯನ್ನು ಯಾಕೆ ವಿರೋಧಿಸಲಿಲ್ಲ?” ಎಂದು ಪ್ರಶ್ನಿಸಿದರು.
ಹಿರಿಯ ನಾಯಕರಾಗಿರುವ ಕಾರಣ ಗೌರವವಿದೆ, ಆದರೆ ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಈಶ್ವರಪ್ಪ ಅವರಿಗೆ ಸಲಹೆ ನೀಡಿದರು.
ಅಡಿಕೆ, ಏರ್ಪೋರ್ಟ್, ವಿದ್ಯುತ್ ಖಾಸಗೀಕರಣ ಸೇರಿ ಹಲವು ವಿಚಾರಗಳ ಪ್ರಸ್ತಾಪ
ಮಹಾರಾಷ್ಟ್ರದಲ್ಲಿ ಅಡಿಕೆ ಸಾಗಾಟಕ್ಕೆ ಉಂಟಾಗಿರುವ ತೊಂದರೆಯಿಂದ ರೈತರಿಗೆ ನಷ್ಟವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಅಡಿಕೆ ಬೆಲೆ ಈಗಾಗಲೇ ಸುಮಾರು ₹5,000ರವರೆಗೆ ಇಳಿದಿದ್ದು, ಕೇಂದ್ರ ಸರ್ಕಾರ ತಕ್ಷಣ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.

