ಡಾ ಬಿ ಆರ್ ಅಂಬೇಡ್ಕರ್ ಜಯಂತಿ- ನಮ್ಮೂರ ಬಳಗದಿಂದ ಸಂವಿಧಾನ ಪೀಠಿಕೆ ಓದುವ ಮುಖಾಂತರ ಆಚರಣೆ – ಸಮಾನತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳ ಸಂಕಲ್ಪ ದಿನ – ಕೆ ರಂಗನಾಥ್
ಸಂವಿಧಾನ ಶಿಲ್ಪಿ ಭಾರತ ರತ್ನ ಡಾ ಬಿ.ಆರ್ ಅಂಬೇಡ್ಕರ್ ಅವರ 135 ನೇ ಜಯಂತೋತ್ಸವವನ್ನು ನಮ್ಮೂರ ಬಳಗದ ವತಿಯಿಂದ ಇಂದು ಬೆಳಗ್ಗೆ ಅಲ್ಲಮಪ್ರಭು ಮೈದಾನ ಫ್ರೀಡಂ ಪಾರ್ಕ್ ನಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಂವಿಧಾನದ ಪೀಠಿಕೆಯನ್ನು ಓದಿ, ಸಿಹಿ ವಿತರಿಸಿ ಆಚರಿಸಲಾಯಿತು
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಮ್ಮೂರ ಬಳಗದ ಪ್ರಧಾನ ಸಂಚಾಲಕ ಕೆ.ರಂಗನಾಥ್ ರವರು “ಕಲಿಯಿರಿ, ಸಂಘಟಿತರಾಗಿ, ಹೋರಾಡಿ” ಇದು ಕೇವಲ ಘೋಷಣೆಯಲ್ಲ, ಪ್ರತಿಯೊಬ್ಬರ ಬದುಕಿಗೆ ದಾರಿದೀಪ. ಏಪ್ರಿಲ್ 14, ಕೇವಲ ಒಂದು ಆಚರಣೆಯ ದಿನವಲ್ಲ; ಸಮಾನತೆ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ನಮ್ಮ ಉಸಿರಾಗಿಸಿಕೊಳ್ಳುವ ಸಂಕಲ್ಪದ ದಿನ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿದ ಅತಿದೊಡ್ಡ ಉಡುಗೊರೆ ಎಂದರೆ ನಮ್ಮ ‘ಭಾರತದ ಸಂವಿಧಾನ’. ಇದು ಪ್ರತಿಯೊಬ್ಬ ಭಾರತೀಯನ ಹಕ್ಕುಗಳನ್ನು ರಕ್ಷಿಸುವ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವ ಪವಿತ್ರ ಗ್ರಂಥ.ಶಿಕ್ಷಣವೇ ಶಕ್ತಿ ಎಂದು ಜಗತ್ತಿಗೆ ಸಾರಿದ, ಅಸಮಾನತೆಯ ವಿರುದ್ಧ ಸಿಡಿದೆದ್ದ ಆ ಮಹಾನ್ ಚೇತನದ ಹೆಜ್ಜೆಗುರುತುಗಳನ್ನು ನಾವೆಲ್ಲರೂ ಅನುಸರಿಸೋಣ. ಅವರ ವಿಚಾರಧಾರೆಗಳು ಇಂದಿಗೂ, ಎಂದೆಂದಿಗೂ ಪ್ರಸ್ತುತ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ನಮ್ಮೂರ ಬಳಗದ ಗೌರವ ಸಂಚಾಲಕರಾದ ಹೆಚ್ ಪಾಲಾಕ್ಷಿ, ಸಿ ರವಿ, ಸಂಚಾಲಕರುಗಳಾದ ಕೆ.ಆರ್ ಸುರೇಶ್, ಎಚ್.ಪಿ ಗಿರೀಶ್, ಟಿ ಗುರುಪ್ರಸಾದ್, ಎಂ ರಾಕೇಶ್, ರಾಜೇಶ್ ಮಂದಾರ, ರವಿ ಶಾಸ್ತ್ರಿ, ಮೈಸೂರು ಕುಮಾರ್ ,ಜಯಪ್ರಕಾಶ್, ಕೇಶವಮೂರ್ತಿ,ಗೋಪಿ ಆಚಾರಿ,ದಾನೇಶ್, ಕಿರಣ್, ಕೇಶವ ಸೀಗೆಹಟ್ಟಿ,ಶ್ರೀಕಾಂತ್, ರಾಘವೇಂದ್ರ, ನಂದನ್, ತೇಜಸ್, ಸಂದೇಶ್, ಇತರರು ಇದ್ದರು..

